
ಅಭಿಜಾತ ಕನ್ನಡ ಡೇಟಾಬೇಸ್ ಯೋಜನೆಯ ಪ್ರಾರಂಭ
ಮಾರ್ಚ್ 15, 2024

ಪಂಪ ಭಾರತದ ಇಂಗ್ಲಿಷ್ ಅನುವಾದವನ್ನು ಕುರಿತ ಪ್ರಕಟನೆ

ಕರ್ಣಾಟ**:** ಅಭಿಜಾತ ಕನ್ನಡ ಕೇಂದ್ರದಲ್ಲಿ, ಕನ್ನಡದ ಅತ್ಯಂತ ಪ್ರಸಿದ್ಧ ಕೃತಿಗಳಲ್ಲೊಂದಾದ ಪಂಪ ಭಾರತದ ಇಂಗ್ಲಿಷ್ ಅನುವಾದ ಪ್ರಗತಿಯಲ್ಲಿರುವುದನ್ನು ಪ್ರಕಟಿಸಲು ನಾವು ಹೆಮ್ಮೆಪಡುತ್ತೇವೆ. ಈ ಮಹಾಕಾವ್ಯವನ್ನು 10ನೇ ಶತಮಾನದ ಆದಿಕವಿ ಪಂಪ ರಚಿಸಿದ್ದು, ವಿಕ್ರಮಾರ್ಜುನ ವಿಜಯ ಎಂಬ ಹೆಸರಿನಿಂದಲೂ ಪ್ರಸಿದ್ಧವಾಗಿದೆ. ಇದು ಮಹಾಭಾರತವನ್ನು ವಿಭಿನ್ನ ದೃಷ್ಟಿಕೋನದಿಂದ ಮರುನಿರೂಪಿಸಿ, ಅರ್ಜುನನನ್ನು ಆದರ್ಶ ವೀರನನ್ನಾಗಿ ಚಿತ್ರಿಸುತ್ತದೆ ಮತ್ತು ಪಂಪನ ಆಶ್ರಯದಾತ ರಾಷ್ಟ್ರಕೂಟ ರಾಜ ಅರಿಕೇಸರಿಯೊಂದಿಗೆ ಪರೋಕ್ಷ ಸಾದೃಶ್ಯವನ್ನು ತರುತ್ತದೆ. ಇದು ಕೇವಲ ಪುನರ್ಕಥನವಲ್ಲ; ಪಂಪಭಾರತ ಸಾಹಿತ್ಯ ಮತ್ತು ತತ್ತ್ವಶಾಸ್ತ್ರದ ಅಪೂರ್ವ ಕೃತಿ, ಇದರಲ್ಲಿ ಜೈನ ತತ್ತ್ವಗಳು, ನೈತಿಕ ಸಂಕಟಗಳು ಮತ್ತು ಕವಿಯ ಗಾಢ ಪಾಂಡಿತ್ಯವು ಸ್ಪಷ್ಟವಾಗಿ ಪ್ರತಿಫಲಿಸುತ್ತದೆ. ಕನ್ನಡ ಕಾವ್ಯ ಪರಂಪರೆಯ ಮೇಲೆ ಇದರ ಪ್ರಭಾವ ಬಹಳ ತೀವ್ರವಾಗಿದ್ದು, ಅನಂತರದ ಕವಿಗಳಿಗೆ ಪ್ರಚೋದನೆ ನೀಡಿದೆ ಮತ್ತು ಪಂಪನಿಗೆ ಕನ್ನಡ ಸಾಹಿತ್ಯ ಇತಿಹಾಸದಲ್ಲಿ ಅನನ್ಯ ಸ್ಥಾನವನ್ನು ನೀಡಿದೆ.
ಪಂಪ ಭಾರತ ಐತಿಹಾಸಿಕ ಹಾಗೂ ಸಾಹಿತ್ಯಕ ಮಹತ್ವ ಹೊಂದಿದ್ದರೂ ಕನ್ನಡೇತರ ಓದುಗರಿಗೆ ಇದು ಲಭ್ಯವಿಲ್ಲ. ಈ ಅನುವಾದ ಯೋಜನೆಯು ಆ ಅಂತರವನ್ನು ಹೋಗಲಾಡಿಸಲು ಮತ್ತು ಈ ಶ್ರೇಷ್ಠ ಕೃತಿಯನ್ನು ಜಾಗತಿಕ ಓದುಗ ಸಮುದಾಯಕ್ಕೆ ತಲುಪಿಸಲು ಒಂದು ಪ್ರಯತ್ನವಾಗಿದೆ. ಈ ಅನುವಾದವನ್ನು ಮೂವರು ಪ್ರಖ್ಯಾತ ವಿದ್ವಾಂಸರು ಕೈಗೊಂಡಿದ್ದಾರೆ: ಆರ್**.ವಿ.ಎಸ್.** ಸುಂದರಂ, ಕನ್ನಡ ಅಭಿಜಾತ ಸಾಹಿತ್ಯದ ಅನುವಾದದಲ್ಲಿ ನಿರಂತರವಾಗಿ ತೊಡಗಿರುವ ಬಹುಭಾಷಾವಿದ್ವಾಂಸರು; ಡಿ**.ಎ.** ಶಂಕ****ರ್, ಭಾರತೀಯ ಮತ್ತು ಪಾಶ್ಚಾತ್ಯ ಸಾಹಿತ್ಯ ಪರಂಪರೆಯಲ್ಲಿ ಆಳವಾದ ಪ್ರಾವೀಣ್ಯ ಹೊಂದಿರುವ ಹಿರಿಯ ಪ್ರಾಧ್ಯಾಪಕರು; ಮತ್ತು ಲಕ್ಷ್ಮೀನಾರಾಯಣ ಅರೋರ, ಭಾಷಾ ಮತ್ತು ಕಾವ್ಯಶಾಸ್ತ್ರದ ಸೂಕ್ಷ್ಮತೆಯ ಅಗಾಧ ಅರಿವು ಹೊಂದಿರುವ ಅನುಭವಿ ಅನುವಾದಕರು. ಇವರ ಸಂಯುಕ್ತ ಪಾಂಡಿತ್ಯವು ಪಂಪನ ಕೃತಿಯ ಪ್ರಾಯೋಗಿಕ, ಸಾಹಿತ್ಯಕ ಮತ್ತು ಸಾಂಸ್ಕೃತಿಕ ಸೂಕ್ಷ್ಮಗಳನ್ನು ಸರಿಯಾಗಿ ಅನುವಾದಿಸುವಲ್ಲಿ ನೆರವಾಗಲಿದೆ.
ಪಂಪ ಭಾರತವನ್ನು ಅನುವಾದಿಸುವುದು ಒಂದು ಸವಾಲಿನ ಕೆಲಸ, ಏಕೆಂದರೆ ಪಂಪನ ಶೈಲಿ ವಿಶಿಷ್ಟವಾಗಿ ಗಾಢ ಮತ್ತು ಶ್ಲೇಷ (ಪದಬಂಧ)ಗಳ ಪ್ರಚುರತೆಯಿಂದ ಕೂಡಿದೆ. ಪಂಪನ ಪದ್ಯಗಳು ಕೇವಲ ವಿವರಣಾತ್ಮಕವಲ್ಲ, ಅವು ವಿಭಿನ್ನ ಅರ್ಥಪೂರ್ಣ ಶ್ರೇಣಿಗಳನ್ನು ಹೊಂದಿದ್ದು, ಸೂಕ್ಷ್ಮ ವ್ಯಾಖ್ಯಾನಕ್ಕೆ ಅನುವು ಮಾಡಿಕೊಡುತ್ತವೆ. ಅನುವಾದಕರು ಮೂಲ ಪದ್ಯದ ನಯವೂ ಲಯವೂ ಉಳಿಯುವಂತೆ ಮಾಡಲಿದ್ದು, ಸಮಕಾಲೀನ ಓದುಗರಿಗೆ ಸುಗಮವಾಗುವ ರೀತಿಯಲ್ಲಿ ಅದನ್ನು ರೂಪಿಸುತ್ತಿದ್ದಾರೆ.
ಈ ಪ್ರತಿಷ್ಠಿತ ಯೋಜನೆಯು ಈಗಾಗಲೇ ಪ್ರಗತಿಯಲ್ಲಿದ್ದು, ಮುಂದಿನ ಒಂದೆರಡು ವರ್ಷಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಈ ಅನುವಾದದ ಪ್ರಕಟನೆಯಿಂದ ವಿದ್ವಾಂಸರು, ವಿದ್ಯಾರ್ಥಿಗಳು ಮತ್ತು ಭಾರತೀಯ ಸಾಹಿತ್ಯಾಸಕ್ತರು ಕನ್ನಡದ ಶ್ರೇಷ್ಠ ಪ್ರಾಚೀನ ಮಹಾಕಾವ್ಯವನ್ನು ಸಮರ್ಥವಾಗಿ ತಿಳಿಯುವ ಅಪರೂಪದ ಅವಕಾಶ ಒದಗಲಿದೆ.
ʼಕರ್ಣಾಟʼದಲ್ಲಿ, ಈ ಯೋಜನೆಯು ಕರ್ನಾಟಕದ ಪುರಾತನ ಸಾಹಿತ್ಯ ಪರಂಪರೆಯನ್ನು ಸಂರಕ್ಷಿಸಿ, ಅದನ್ನು ಪ್ರಚೋದಿಸಲು ಕೈಗೊಂಡಿರುವ ನಮ್ಮ ಬೃಹತ್ ಧ್ಯೇಯದ ಭಾಗವಾಗಿದೆ.